Saturday, February 19, 2011

ರಾಜಕಾರಣಿ.


ಕೈ ಮುಗಿದು ಗೆದ್ದು, ನರಿಯಂತೆ ವಂಚಿಸಿ
ಒಮ್ಮೆಯೂ ಕ್ಷೇತ್ರವನು ತಿರುಗಿ ನೋಡದ ಭೂಪ
ಪುಕ್ಕಟೆ ಮನೆ ಮಠ, ತಿಂದುಂಡು ಕೊಬ್ಬಿ
ರಾಕ್ಷಸ ಗಾತ್ರದಿಂದ ಆಕರ್ಶಿಸುವ ರೂಪ

ಖಾಧಿಯ ತೊಟ್ಟು, ಟೋಪಿಯ ಇಟ್ಟು
ಗಾಂಧಿಯ ಪ್ರತಿಮೆಗೆ ನಮಸ್ಕರಿಸುವ ವಂಚಕ
ಆಧಿಕಾರ ಸಿಕ್ಕಾಗ, ಗಾಂಧಿ ತತ್ವ ಮರೆತು
ಬಡವರ ವಧೆ ಮಾಡಲು ಹೇಸದ ಕೀಚಕ

ಬರೆಯಲು ಅರಿಯದೆ, ಹೆಬ್ಬೆಟ್ಟು ಒತ್ತಿ
ಬರೆದಿಟ್ಟ ಬಾಷಣವನು ಓದಲರಿಯದ ಕೋಣ
ಕುರ್ಚಿಯ ಉಳಿಸಲು ಸುಳ್ಳು ಆಶ್ವಾಸನೆ ನೀಡಿ
ಪಂಗಡಗಳ ನಡುವೆ ಜಗಳ ತಂದಿಡುವ ಜಾಣ

ತನ್ನ ಸ್ಥಾನ ರಕ್ಶಿಸಲು, ಬಂದು ಬಳಗ ಲೆಕ್ಕಿಸದೆ
ಯಾರನ್ನಾದರೂ ಬಲಿಪಶು ಮಾಡುವ ರಾಕ್ಶಸ
ತನ್ನ ರಕ್ಶಣೆ ಮೂಲಭೂತ ಹಕ್ಕೆಂದು
ಕೊಲೆಗೆಡುಕರನು ತನ್ನ ಸುತ್ತ ಬೆಳೆಸುವ ಪೋಷಕ

ಕೊಟ್ಟ ಆಶ್ವಾಸನೆ ಗೆದ್ದು ಬಂದಂದು ಮರೆತು
ಬಡ ಜನರ ಶಾಪ ಹೊತ್ತು ಕೊಳ್ಳುವ ಪಾಪಿ
ಯಾವುದೇ ಸಮಾರಂಭಕ್ಕೆ ತಡವರಿಸಿ ಬಂದು
ಪತ್ರಿಕೆಯಲಿ ಹೆಸರು ಚಾಪುವಂತೆ ಮಾಡುವ ಕುರೂಪಿ

ಸಂಪತ್ತು ಗಳಿಸಲು ಭೂ-ತಾಯಿಯ ಮರೆತು
ವಿನಾಶಕರ ಜೊತೆ ಕೈ ಮಿಲಾಯಿಸುವ ದ್ರೋಹಿ
ಆರೋಪ ಬಂದಾಗ ನಿರಪರಾಧಿಯಂತೆ ವರ್ತಿಸಿ
ಹಣದ ಬಲದಿಂದ ಸರ್ಕಾರ ಖರೀದಿಸುವ ವಿದ್ರೋಹಿ

ತಲೆನೋವು ಹೊಟ್ಟೆನೋವಿಗೆ ವಿದೇಶ ಸುತ್ತಿಬಂದು
ಜನರ ಹಣದಿಂದ ಸ್ವಾಸ್ತ್ಯ ಕಾಪಾಡುವ ಭಿಕಾರಿ
ಮಂದಿರ ಮಸೀದಿಯ ವಿಷಯ ಎತ್ತಿ ಹಿಡಿದು
ಜಾತಿ ಭೇದದ ವಿಷಬೀಜ ಬಿತ್ತುವ ಪುಡಾರಿ.

No comments:

Post a Comment